Thursday, January 22, 2009

'ಮತಾಂತರ ಸತ್ಯದ ಮೇಲೆ ಹಲ್ಲೆ' ಭೈರಪ್ಪ ಮತ್ತು ಗಣೇಶ್

ಮತಾಂತರ ಸತ್ಯದ ಮೇಲೆ ಹಲ್ಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ ಎಲ್ ಭೈರಪ್ಪನವರ ಮಾತಿನ ಧ್ವನಿ ಮುದ್ರಿಕೆಗಾಗಿ http://www.sendspace.com/file/m2127l
ಮತ್ತು
ಶತಾವಧಾನಿ ಗಣೇಶ್ ಅವರ ಮಾತಿಗಾಗಿ
http://www.sendspace.com/file/ketknr

ಹೀಗೊಂದು ಅನುಭವ

ಎಂದಿನಂತೆ ಕಛೇರಿಯಿಂದ ಬಂದವನೆ ಮುಖ ತೊಳೆದು, ಆಡಲು ಹೊರಡುವ ಮುನ್ನ ಮಗನಿಗೆ ಆಟದಿಂದ ಬೇಗ ಬರುವಂತೆ ಸೂಚಿಸಿ ಅಮ್ಮ ಕೊಟ್ಟ ತಿಂಡಿಯನ್ನು ಮುಗಿಸಿ ಬೈಕೇರಿ ಹೊರಟೆ. ಇಂದೇಕೊ ಹೊಸ ಹುಮ್ಮಸ್ಸು ಕಾರಣ ನಿನ್ನೆ ಒಂದೂ ಆಟವನ್ನು ಗೆದ್ದಿರಲಿಲ್ಲ ನನ್ನೊಡನೆ ಜೊತೆಯಾಗಲು ಯಾರೂ ಇಷ್ಟಪಡುತ್ತಿರದಿದ್ದುದು ಕಾರಣವಿರಬಹುದು. ಸ್ವಲ್ಪ ವೇಗವಾಗಿಯೇ ಗಾಡಿ ಓಡಿಸುತ್ತಿದ್ದೆನೆನೋ? ಆಗ ಕಣ್ಣಿಗೆ ಬಿದ್ದದ್ದು ಕಾರ್ಖಾನೆಯ ಆಟದ ಮೈದಾನಕ್ಕೆ ಹೋಗುವ ದಾರಿಯಲ್ಲಿರುವ ದೊಡ್ಡ ಪ್ರದೇಶದಲ್ಲಿರುವ ಏಕಾಂಗಿ ಮರದ ಬಳಿ ಸುಮಾರು ೪-೫ ಜನ ಏನೋ ಚಟುವಟಿಕೆ ನಡೆಸುತ್ತಿದ್ದರು ಕುತೂಹಲದಿಂದ ಹತ್ತಿರ ಹೋದವನಿಗೆ ಕಂಡದ್ದು ಅವರು ಯಾವುದೋ ಹಕ್ಕಿ ಹಿಡಿಯಲು ಅಥವ ಅಳಿಲಿಗೆ ಬಹುಶಃ ಬಲೆ ಒಡ್ಡುತ್ತಿರಬಹುದೆಂದು ಊಹಿಸಿದ್ದೆ.
ಕೆಲವು ತಿಂಗಳ ಹಿಂದಷ್ಟೆ ವೃತ್ತ ಪತ್ರಿಕೆಗಳಲ್ಲಿ ಅಳಿಲು ಹಿಡಿಯುವವರ ಬಗ್ಗೆ ಎಚ್ಚರಿಸಿವ ಲೇಖನಗಳು ಪ್ರಕಟಗೊಂಡಿದ್ದವು. ನನ್ನೊಳಗಿನ ಪ್ರಾಣಿಪ್ರಿಯ (ಮಾಂಸಾಹಾರವಲ್ಲ) ಎಚ್ಚರಗೊಂಡು ನನ್ನ ಕೈಲಾದ ಅಳಿಲು ಸೇವೆ ಮಾಡಲು ಹಾತೊರೆದಿದ್ದ. ಅವರನ್ನು ಕರೆದು ಏನ್ಮಾಡ್ತ ಇದೀರ ಎಂದು ಪ್ರಶ್ನಿಸಿದ ನನ್ನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಕೆಲವರು ಸುಮ್ಮನೆ ನಿಂತರು ಇನ್ನು ಕೆಲವರು ನನ್ನನ್ನು ಗಮನಿಸದವರಂತೆ ಮರದ ಕೊಂಬೆಗಳ ಮೇಲೆನಿಂದ ಪ್ಲಾಸ್ಟಿಕ್ನ ಸಣ್ಣ ದಾರಗಳನ್ನಿ ಇಳಿಬಿಟ್ಟು ಬಲೆಯಂತೆ ಹರಡಲು ಅಣಿಯಾಗುತ್ತಿದ್ದರು. ನಾನು ಅವರನ್ನು ಎಚ್ಚರಿಸಿದೆ ಸ್ವಲ್ಪ ಸಣ್ಣ ದನಿಯಲ್ಲೆ ಅವರಲ್ಲೊಬ್ಬ ಬಂದವನು ಏನಿಲ್ಲ ಸಾರ್ ನೀವು ಹೋಗಿ ಅಂದ. ಇಲ್ಲಪ್ಪ ಏನ್ ಮಾಡ್ತ ಇದೀರ ಹೇಳೀ ನಿಮ್ಮನ್ನು ನೋಡಿದ್ರೆ ಯಾವ್ದೋ ಅಳಿಲಿಗೋ ಮೊಲಕ್ಕೊ ಅಥವ ಹಕ್ಕಿಗೋ ಬಲೆ ಬಿಡ್ತಾ ಇದೀರ ಎಂದು ದಬಾಯಿಸಿದೆ. ಅದರಲ್ಲೊಬ್ಬ ನಿಮ್ಗ್ಯಾಕ್ರಿ ನಿಮ್ ಕೆಲ್ಸ ನೋಡ್ಕೋ ಹೋಗಿ ಎಂದ. ನಾನು ಅದನ್ನೆ ಮಾಡ್ತಾ ಇರೋದು ಎಂದು ಎಚ್ಚರಿಸಿ ನನ್ನ ಮೊಬೈಲಿಂದ ಕಾರ್ಖಾನೆಯ ಸೆಕ್ಯುರಿಟಿಯವರಿಗೆ ಮತ್ತು ಪೋಲೀಸ್ನವರಿಗೆ ಫೋನಾಯಿಸುತ್ತೆನೆಂದು ಹೆದರಿಸಿದೆ. ಈ ಸಮಯಕ್ಕೆ ಅವರು ಹರಡುತ್ತಿದ್ದ ಬಲೆಯನ್ನು ಬಿಚ್ಚಿದರು. ಅಷ್ಟರಲ್ಲಿ ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಬಂದು ನಾವು ಇದೆ ಏರಿಯಾದವ್ರು ನಮ್ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ ಎಂದ. ಸರಿ ಕುಡುಕನ ಬಡಬಡಿಕೆಗೆ ನಾನೇಕೆ ಬೆಲೆ ಕೊಡಬೇಕೆಂದು ತೀರ್ಮಾನಿಸಿದೆ. ನಡೆದು ಹೋಗುತ್ತಿದ್ದ ಕೆಲವರು ಸ್ವಲ್ಪ ಹೊತ್ತು ನಿಂತು ತಮ್ಮ ಪಾಡಿಗೆ ಹೋಗುತ್ತಿದ್ದರು. ಅಷ್ಟರಲ್ಲಿ ಒಬ್ಬ ಸಣಕಲ ಸ್ವಲ್ಪ ವಯಸ್ಸಾದ ವ್ಯಕ್ತಿ ತೊಡರುತ್ತ ತನ್ನ ಕಾಲುಗಳನ್ನು ಎಳೆದು ಹಾಕುತ್ತಾ ಬಂದ. ಅವನನ್ನು ನೋಡಿದರೆ ಲಕ್ವ ಹೊಡೆದ ವ್ಯಕ್ತಿಯೆಂದು ನನಗೆ ಗೊತ್ತಾಯಿತು. ಬಂದವನೆ ಏಯ್ ನಿಂಗೇನೊ ಮುಚ್ಕೊಂದು ಹೋಗು ನಾನ್ಯಾರು ಅಂತ ನಿಂಗೆ ಗೊತ್ತಿಲ್ಲ ಎಂದು ಉಸಿರು ಬಿಡಲಾಗದಿದ್ದರೂ ಅಬ್ಬರಿಸುವವನಂತೆ ನಟಿಸಿದ. ನಾನೂ ಕೂಡ ಅವನೊಡನೆ ವಾಗ್ವಾದಕ್ಕಿಳಿದೆ. ಈ ಸಮಯಕ್ಕೆ ಸರಿಯಾಗಿ ಕುಡಿದು ತೂರಾಡುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೋಡು ನಮ್ಮ ತಂಟೆಗೆ ಬಂದ್ರೆ ನಿಂಗೆ ಒಳ್ಳೆದಾಗಲ್ಲ ನೋಡು, ಆಮೇಲೆ ಸುಮ್ನೆ ನಮ್ಮನ್ನ ಬಯ್ದ ಅಂಥ ಪೋಲೀಸ್ಗೆ ದೂರು ಕೊಡ್ತಿವಿ ಅಂತ ಜೇಬಿನಿಂದ ಒಂದು ವಿಸಿಟಿಂಗ್ ಕಾರ್ಡ್ ತೆಗೆದ, ಏನಪ್ಪ ಅದು ಅಂದ್ರೆ ನೋಡು ನಾವು ಇದರವ್ರು ಆಮೇಲೆ ನಿಂಗೆ ಅಶ್ಟೆ ಎಂಬ ಎಚ್ಚರಿಕೆ ಮತ್ತೊಮ್ಮೆ ಬಂತು ಏನೆಂದು ಕಾರ್ಡ್ ತೆಗೆದು ನೋಡಿದರೆ ಅಂಬೇಡ್ಕರ್ ಫೋಟೊ ಇರುವ ದಲಿತ ಸಂಘರ್ಷ ಸಮಿತಿಯ ಪ್ರಾದೇಶಿಕ ಸಮಿತಿಯ ಅಧ್ಯಕ್ಷರ ವಿಸಿಟಿಂಗ್ ಕಾರ್ಡ್. ನನಗೆ ಏನು ಮಾಡ್ಬೇಕೆಂದು ಒಮ್ಮೆಗೆ ಹೊಳೆಯಲಿಲ್ಲ. ನಮ್ಮನ್ನ ಸುಮ್ಸುಮ್ನೆ ಬಯ್ದ ಹೊಡೆದ ಅಂತ ನಾವೇ ಹೇಳ್ತಿವಿ ಎಂದು ಮೆಲ್ಲಗೆ ಉಸುರಿದ. ಅದರಲ್ಲೊಬ್ಬ ಸಾರ್ ನಾವು ಇಲ್ಲಿ ಬಾವಲಿ ಹಿಡಿತಾ ಇದಿವಿ ರಾತ್ರಿ ಊಟಕ್ಕೆ ಎಂದ.
ನನಗೆ ಈಗಾಗಲೆ ಇಂತಹ ಪ್ರಸಂಗಗಳಲ್ಲಿ ಕಾನೂನು ನನ್ನ ನೆರವಿಗೆ ಬರುವುದಿಲ್ಲವೆಂಬ ಅರಿವಿತ್ತು. ಎನಾದರಾಗಲಿ ಎಂದು, ಸರಿ ನಡಿಯಪ್ಪ ಅವರಿಗೆ ಫೋನ್ ಮಾಡೋಣ ನಾನು ಅದರ ಸದಸ್ಯನೆ ಎಂದು ಭಂಡ ಧೈರ್ಯದಿಂದ ಸ್ವಲ್ಪ ಏರಿದ ದನಿಯಲ್ಲೆ ಹೇಳಿದೆ. ಎಲ್ಲರೂ ತಮ್ಮ ತಮ್ಮ ಮುಖಗಳನ್ನು ನೋಡಿ ಕೊಂಡು ಅಲ್ಲಿಂದ ಹೋಗಿ ಬಿಟ್ಟರು. ಸರಿ ಇಷ್ಟಕ್ಕೆ ಮುಗೀತಲ್ಲ ಎಂದು ಕೊಳ್ಳುತ್ತಾ ಆಟದ ಮೈದಾನದ ಕಡೆ ಹೊರಟೆ. ಇಂದು ಭರ್ಜರಿಯಾಗಿ ಆಡುತ್ತಾ ೩ ಆಟಗಳನ್ನು ಗೆದ್ದಿದ್ದೆ.
೪ನೇ ಆಟಕ್ಕೆ ಸುಸ್ತಾಗಿ ಬೇರೆಯವನಿಗೆ ಆಡಲು ಬಿಟ್ಟು ಅಲ್ಲೆ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ತುಂಬಾ ಹೊತ್ತಿನಿಂದ ಅಲ್ಲಿ ಆಟೋವೊಂದು ನಿಂತಿತ್ತು. ಅದರಿಂದ ಇಳಿದ ಚಾಲಕ ನೋಡುವುದಕ್ಕೆ ಒರಟನಂತಿದ್ದವನು ನನ್ನ ಬಳಿ ಬಂದು ನಿಮ್ಮನ್ನ ರಾಜಣ್ಣ ಕರೀತಾ ಇದನೆ ಎಂದ ನನಗೆ ಅಲ್ಲವೆಂದು ನಾನು ಸುಮ್ಮನೆ ಕುಳಿತಿದ್ದೆ. ಏಕೆಂದರೆ ನಾನಾಗಲೆ ಆಟದ ಹುಮ್ಮಸ್ಸಿನಲ್ಲಿ ಈ ಘಟನೆಯನ್ನು ಮರೆತಿದ್ದೆ. ಮತ್ತೊಮ್ಮೆ ಆತ ನನ್ನನ್ನು ಕುರಿತು ನಿಮ್ಗೆ ಸಾರ್ ಬನ್ನಿ ಎಂದ ನನಗೆ ಅರ್ಥವಾಗಲಿಲ್ಲ ಯಾವ ರಾಜಣ್ಣನಪ್ಪ ನಾನ್ಯಾಕೆ ಎಲ್ಲಿಗೆ ಬರ್ಬೇಕು ಎಂದೆ. ಅದೇ ಸಾರ್ ಡಿ ಎಸ್ ಎಸ್ ಅಧ್ಯಕ್ಷರ ಭಾಮೈದ ರಾಜಣ್ಣ ಅಂದ ನಾನ್ಯಾಕಪ್ಪ ಬರ್ಬೇಕು ಎಂದು ಕೇಳುತ್ತಿದ್ದವನಿಗೆ ಕಾಣಿಸಿದ್ದು. ಬಡಕಲಾದ ಲಕ್ವ ಪೀಡಿತ ವ್ಯಕ್ತಿ ಆಕ್ರೋಶದಿಂದ ಇಳಿದು ತನ್ನೆಲ್ಲ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾ ನನ್ನೆಡೆಗೆ ಬಂದ ಅವನ ಅವತಾರ ನನಗೆ ನಗು ತರಿಸುತ್ತಿತ್ತು ಸರಿಯಾಗಿ ಮಾತನಾಡಲೂ ಆಗದವ ನನನ್ನು ಕೊಂದು ಬಿಡುವವನಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ. ಅವನ ಆರೋಪವಿಷ್ಟೆ, ನೀನು ನನಗೆ ಬಲೆ ಹರಡಲು ತಡೆದೆ, ನನಗೆ ಎದುರು ಮಾತನಾಡಿದೆ, ನನ್ನನ್ನು ಬಯ್ದೆ ನಾನು ದ ಸಂ ಸ ಯ ಅಧ್ಯಕ್ಷನ ಭಾಮೈದ ಎಂದು ಕಷ್ಟಪಟ್ಟು ಕಿರುಚಿದ. ಜಾಗ ನಿಂದಲ್ಲ ಕಾರ್ಖಾನೆದು ನಾವು ಸ್ಥಳೀಯರು ಏನ್ಬೇಕಾದ್ರು ಮಾಡ್ಕೋತಿವಿ ಎಂದು ಒಂದೆ ಸಮನೆ ಒದರಲಾರಂಭಿಸಿದ. ನಾನು ಆತನಿಗೆ ಯಾವುದೇ ಅವಾಚ್ಯ ಶಬ್ದ ಬಳಸದಿದ್ದನ್ನು ಅವನಿಗೂ ಅವನ ಸ್ನೇಹಿತರಿಗೂ ತಿಳಿಸಿ ಅವನ ಜೊತೆಯಿದ್ದ ಇನ್ನೂ ಕೆಲವರು ಅಲ್ಲಿ ನಡೆದ ಘಟನೆಗೆ ಸಾಕ್ಷಿಯಿದ್ದ ಅವನ ಜೊತೆಯವರಿಗೆ ತಿಳಿ ಹೇಳಿದಾಗ ಆತನಿಗೆ ಸುಮ್ಮನಾಗದೆ ಬೇರೆ ದಾರಿಯಿರಲಿಲ್ಲ. ಅಷ್ಟರಲ್ಲಿ ನನ್ನ ಜೊತೆ ಆಡುತ್ತಿದ್ದ ನನ್ನ ಸ್ನೇಹಿತರೆಲ್ಲ ಸಂದರ್ಭದ ಗಂಭೀರತೆ ಅರಿತು ಅವನಿಗೆ ಬಯ್ದು ನೀವೂ ಅಲ್ಲಿ ಹಕ್ಕಿ ಪ್ರಾಣಿ ಏನೂ ಹಿಡಿಯುವಂತಿಲ್ಲ ಎಂದು ದಬಾಯಿಸಿ ಕಳಿಸಿದರು. ನನ್ನೊಡನೆ ಆಡುತ್ತಿದ್ದವರಲ್ಲಿ ಆ ಊರಿನ ಭಾರಿ ಕುಳಗಳಿದ್ದುದರಿಂದಲೋ ಎನೋ ಆತ ಗೊಣಗುತ್ತಾ ಆಟೋ ಕಡೆಗೆ ನಡೆದು ಹೋದ. ಆಟೋದಲ್ಲಿ ಕೂರುವ ಮುನ್ನ ಇದೇ ದಾರಿಯಲ್ಲಿ ಬರ್ತಿಯ ನೋಡ್ಕೋತಿನಿ ಎಂದು ಬಡಬಡಿಸುತ್ತಾ ಹೋದ.