ತುಂಗ ಭದ್ರೆಯರ ಸಂಗಮ ಕೂಡ್ಲಿ
ಕೂಡ್ಲಿಯಿಂದ ಹಿಂತಿರುಗುವಾಗ
ಗುಡವಿ ದಾರಿಯಲ್ಲಿ
ಗುಡವಿ ಪಕ್ಷಿಧಾಮದಲ್ಲಿ
ಹತ್ತಿಯ ಉಂಡೆಗಳಂತೆ ಹಕ್ಕಿಗಳು
ಮಧುಕೇಶ್ವರನ ದ್ವಾರಪಾಲಕ
ಮಳೆಯಲ್ಲಿ ತೋಯ್ದ ಮಧುಕೇಶ್ವರ ದೇವಳ
ಗೋಪುರ
ಬನವಾಸಿಯಲ್ಲಿರುವ ಅಪರೂಪದ ತ್ರೀಲೋಕ ಮಂಟಪ
ಮಳೆಯಲ್ಲಿ ಒದ್ದೆಯಾದ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ರಸ್ತೆಗಳು
ದಾರಿಯಲ್ಲಿ ಸಿಕ್ಕ ಪ್ರತಿಯೊಂದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದವು
ಸ್ವರ್ಣವಲ್ಲಿ ಮಠದ ಬಳಿಯಿರುವ ಶಾಲ್ಮಲೆ
ಉಂಚಳ್ಳಿ ಜಲಪಾತ, ೩ ನೇ ವೀಕ್ಷಣಾ ಗೋಪುರಕ್ಕೆ ಇಳಿಯಲು ಅಸಾಧ್ಯವಾದಂತ ಮಳೆಯಲ್ಲಿ
ಅಘನಾಶಿನಿಯ ಸೇತುವೆಯ ಮೇಲೆ ನಮ್ಮ ತಂಡ
ಶನಿವಾರ ಅಣೆಕಟ್ಟಿನಿಂದ ನೀರು ಬಿಟ್ಟಿದ್ದರ ಪರಿಣಾಮವಿರಬೇಕು, ಜೋಗಿನ ತುಂಬಾ ಬರೀ ಮಂಜು
೩ ದಿನ ಮುಂಚೆ ಅನಿಲ್, ರಾಘು ಮತ್ತು ರಾಮಶೇಷನ್ ಜೊತೆ ಬಂದಾಗ ಇಲ್ಲಿ ಕುಳಿತಿದ್ದು ಈಗ ಸಹಾಯವಾಯ್ತು
ಕೋಗಾರು ಭಟ್ಕಳ ರಸ್ತೆಯಲ್ಲಿ ಸಿಕ್ಕ ಝರಿ, ಹಿಂದಿನ ದಿನ ಬಿದ್ದ ಮಳೆಯಿಂದಾಗಿ ಎಲ್ಲೆಲ್ಲೂ ಜಲಧಾರೆಗಳು ಮೈದುಂಬಿ ಹರಿಯುತ್ತಿದ್ದವು
ಚನ್ನೆಕಲ್ ಜಲಪಾತ
ಅರವಿಂದ್, ರಾಘವೇಂದ್ರ ಶರ್ಮ ಮತ್ತು ರಾಜೇಶ್ ನಾಯಕ್ ಅವರ ಬ್ಲಾಗ್ ಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಿಂದ ಈ ಜಲಪಾತಕ್ಕೆ ಹೋಗಿದ್ದು
ಭೀಮೇಶ್ವರ ದೇವಸ್ಥಾನದ ಬಳಿಯ ಜಲಪಾತ
ಭೀಮೇಶ್ವರದ ಬಳಿಯ ಹೊಳೆ
*****ಚಂಡೆಮನೆ ಜಲಪಾತ******
ನನ್ನ ಸ್ನೇಹಿತ ರಘು, ಸ್ವರ್ಣವಲ್ಲಿಗೆ ಹೋಗಿದ್ದೆ ಅಂತ ಚಾಮರಾಜ ಪೇಟೆಯಿಂದ ಬಸವನಗುಡಿಗೆ ಹೋಗಿ ಬಂದಹಾಗೆ ಹೇಳ್ತಿಯಿದ್ದಲ್ಲೊ ಅಂತ ಒಳ್ಗೊಳ್ಗೆ ನಗ್ತಿದ್ದ. ಅದೇನು ವ್ಯಂಗ್ಯದ ನಗುವೊ? ಆಶ್ಚರ್ಯದ್ದೊ? ತಿಳಿಯಲಿಲ್ಲ ಅದಕ್ಕೆ ಈ ಬರಹ
ಅಕ್ಟೋಬರ್ ೨, ೩ ಮತ್ತು ೪ ರಂದು ಇದ್ದ ರಜಾ ಸಮಯದಲ್ಲಿ ಮಾಡಿದ ಪ್ರವಾಸದ ಚಿತ್ರಗಳಿವು. ಸಾಗರದಲ್ಲಿ ಉಳಿದು ಅಲ್ಲಿಂದ ೩ ರಂದು ಗುಡವಿ, ಬನವಾಸಿ ಸ್ವರ್ಣವಲ್ಲಿ ಮತ್ತು ಉಂಚಳ್ಳಿ ಜೋಗ ನೋಡಿದ ನಂತರ ಸಾಗರಕ್ಕೆ ಹಿಂತಿರುಗಿ ಮರುದಿನ ಜೋಗ,ಕೋಗಾರು ಭಟ್ಕಳ ರಸ್ತೆಯಲ್ಲಿರುವ ಮಳೆಗಾಲದ ಜಲಪಾತಗಳಾದ ಚಂಡೆಮನೆ, ಚನ್ನೆಕಲ್ ನಂತರ ಭೀಮೇಶ್ವರಕ್ಕೆ ನಡೆದು ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಹಿಂತಿರುಗಿ ಬಂದು ಅಂದೆ ರಾತ್ರಿ ೯ ಘಂಟೆಗೆ ಬೆಂಗಳೂರು ತಲುಪಿದೆ.