Thursday, March 25, 2010

ನರಹತ್ಯೆಯ ಅಜೆಂಡಾ ಹೀಗೊಂದು ವಿಡಂಬನೆ

ಗೋಹತ್ಯೆಯ ನಿಷೇಧ ಕಾನೂನು ಜಾರಿಗೆ ಬಂದದ್ದರಿಂದ ಕೆಲವರಿಗೆ ಕಣ್ಣುರಿ ಮೈ ಉರಿ ಬಂದು ಪರಚಿಕೊಳ್ಳುತ್ತ ಬಾಯಿಗೆ ಬಂದಂತೆ ಮಾತನಾಡುತ್ತಾ ಅದನ್ನು ವಿರೋಧಿಸುವುದು ನೋಡುತ್ತಿದ್ದರೆ, ಇವರ ಈ ಮಾತುಗಳು ಲೇಖನಗಳ ಹಿಂದಿರುವ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತಿಲ್ಲ.

ಗೋಹತ್ಯೆಯನ್ನು ಮಾಡೀಯೆ ತೀರಬೇಕೆಂದು ಇವರೇಕೆ ಇಷ್ಟು ಮುತುವರ್ಜಿ ವಹಿಸುತ್ತಿದ್ದಾರೆ? ಇನ್ನು ಕೆಲವು ಪುಣ್ಯಾತ್ಮರು ವಯಸ್ಸಾದ ದನಗಳನ್ನು ಮನೆಯಲ್ಲಿಟ್ಟುಕೊಳ್ಳಬೇಕೆ ಎಂದು ಕೇಳಿದ್ದಾರೆ. ದನಗಳನ್ನು ಮನೆಯಲ್ಲಿಟ್ಟುಕೊಂಡರೆ ಆಗುವ ನಷ್ಟವನ್ನು ಪೈಸೆಗಳ ಲೆಕ್ಕದಲ್ಲಿ ಕೊಡುತ್ತಾರೆ.

ನಾವಂತೂ ಬಾಲ್ಯದಲ್ಲಿ ಹಸು ಎಮ್ಮೆ ಕರುಗಳನ್ನು ಹಾಸಿಗೆಯಲ್ಲಿ ಮಲಗಿಸಿಕೊಂಡೆ ಮಲಗಿದ್ದೆವು. ಎಂದಿಗೂ ಮನೆಯ ದನಗಳನ್ನು ಕಟುಕರಿಗೆ ಮಾರಿದ್ದಿಲ್ಲ. ವಯಸ್ಸಾದರೆ ಮಾರಬೇಕನ್ನುವ ಇವರ ಬಾಯಿ ಚಪಲ ಆಗ ನಮ್ಮಲ್ಯಾರಿಗೂ ಇರಲೇ ಇಲ್ಲ. ಮಾರುತ್ತೇನೆಂದರೂ ಮನೆಯ ಹಿರಿಯರು ಬೈಯುತ್ತಿದ್ದದ್ದು ಹೀಗೆ, "ಒಂದು ಹೊರೆ ಹುಲ್ಲು ಒಂದು ತಂಬಿಗೆ ನೀರು" ಅದಕ್ಕಿನ್ನೇನು ಬೇಕು ಅದನ್ಯಾಕೆ ಮಾರ್ತೀಯ ನಮ್ಮನೆಲೆ ಸಾಯ್ಲಿ ಬಿಡು. ಸತ್ರೆ ತೋಟಕ್ಕೆ ಗೊಬ್ಬರ ಆಗುತ್ತೆ ಇಲ್ಲಾಂದ್ರೆ ನಾಯಿ ನರಿಗಳಿಗೆ ಆಹಾರ ಎಂದು ಈಗಲೂ ನನ್ನೂರಿನಲ್ಲಿ ಹೇಳುತ್ತಾರೆ.

ನನ್ನೂರಿನಲ್ಲಿ ಇಂದಿಗೂ ನಡೆಯುವ ದನದ ಜಾತ್ರೆಗೆ ಕಟುಕರನ್ನು ಬರಲು ಬಿಡುವುದಿಲ್ಲ. ಬಂದರೂ ಎಷ್ಟೆ ಹಣ ಕೊಡುತ್ತೇನೆಂದರೂ ರೈತ ಅವನ್ನು ಕೊಡುವುದಿಲ್ಲ. ವಯಸ್ಸಾದ ರಾಸುಗಳನ್ನು ಮಾರುವುದಕ್ಕೆ ತರುವುದೇ ಇಲ್ಲ. ಕಟುಕರಿಗೆ ಮಾರಬಾರದೆಂದು ಕೆಲವರು ಕರಪತ್ರದ ಮೂಲಕ ಮತ್ತು ಬೀದಿ ನಾಟಕಗಳ ಮೂಲಕ ಜಾಗೃತಿ ಉಂಟು ಮಾಡುತ್ತಾರೆ.

ಕಳೆದ ೧೦ ವರ್ಷಗಳವರೆಗೂ ರಾಸುಗಳನ್ನು ಲಾರಿಯಲ್ಲಿ ಸಾಗಿಸುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಉತ್ತರ ಕರ್ನಾಟಕದವರೆಗೂ ನೂರಾರು ಕಿಮೀಗಳನ್ನು ನಡೆಸಿಕೊಂಡೆ ಹೋಗುವವರನ್ನು ಕಣ್ಣಾರೆ ಕಂಡಿದ್ದೇನೆ.

ಗೋಹತ್ಯೆಯ ನಿಷೇಧ ಹಿಂದೂಗಳ ಅಜೆಂಡ ಎಂದೆ ಇವರುಗಳು ಇಷ್ಟು ಶತಾಯಗತಾಯ ವಿರೋಧಿಸುವುದು. ನೀವು ಗಮನಿಸಿರಬಹುದು, ಎಲ್ಲದಕ್ಕೂ ರೈತನನ್ನು ಇಲ್ಲವಾದರೆ ದಲಿತನನ್ನು ಎಳೆದು ತರಲಾಗುತ್ತದೆ. ಇಲ್ಲಿ ನಿಜವಾದ ರೈತ ಮತ್ತು ದಲಿತ ತಮ್ಮ ಪಾಡಿಗೆ ತಾವಿದ್ದಾರೆ. ಅವೆರಡು ಈಗ ಸಧ್ಯ ಇರುವ ಸರ್ಕಾರವನ್ನು ಸುಲಭವಾಗಿ ಹೆದರಿಸಲು ಬಳಸುತ್ತಿರುವ ಬೆದರು ಬೊಂಬೆಗಳು. ಗಾಂಧಿಯನ್ನು ಎಲ್ಲದಕ್ಕೂ ಎಳೆದು ತರುವ ಇವರು ಅವಕಾಶ ರಾಜಕಾರಣ ಅನುಕೂಲ ಸಿಂಧು ತಂತ್ರಕ್ಕೆ ಹೆಸರಾದವರುಗಳು. ಗಾಂಧಿ ಬೇಕಾದಾಗ ಗಾಂಧಿ ರೈತ ಬೇಕಾದ ಕಡೆ ರೈತ ಇಲ್ಲ ದಲಿತ. ನಿಜವಾದ ರೈತ ಲಾಭ ನಷ್ಟಕ್ಕಿಂತ ಅವನ ಕಾರ್ಯದಲ್ಲಿ ನಿರತನಾಗಿದ್ದಾನೆ. ಯಾವುದೇ ನಿಜವಾದ ರೈತ ಖಂಡಿತ ತನಗೆ ಅನ್ನ ಕೊಟ್ಟ ರಾಸುಗಳನ್ನು ಕಟುಕರಿಗೆ ಮಾರುವುದಿಲ್ಲ. ಈಗ ಆತನ ತಲೆಗೆ ಇದನ್ನು ತುಂಬಿ ಅವನನ್ನು ಬೀದಿಗೆ ಎಳೆದು ತರಬೇಕಷ್ಟೆ. ವಯಸ್ಸಾದ ಹಸುಗಳಿಗೆ ಒಂದು ಹೊರೆ ಹುಲ್ಲು ಒಂದು ಬಾನಿ ನೀರು ಖಂಡಿತ ರೈತನಿಗೆ ಹೆಚ್ಚಲ್ಲ ಏಕೆಂದರೆ ಆ ರಾಸುಗಳಿಂದ ಅವನು ಅದಕ್ಕಿಂತ ಹೆಚ್ಚಿನದನ್ನು ಪಡೆದಿರುತ್ತಾನೆ. ಅವುಗಳಿಂದಲೆ ತನ್ನ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಆದರೆ ಇವರ ಬಾಯಿ ಚಪಲಕ್ಕೆ ರೈತನ ಮೇಲೆ ಕರುಣೆ ಉಕ್ಕಿ ಬಂದಂತೆ ನಾಟಕವಾಡುತ್ತಿದ್ದಾರೆ. ಇವರ ಅಜೆಂಡ ಆ ಕಸಾಯಿಖಾನೆಗಳನ್ನು ನಂಬಿದವರ ಬದುಕು ಮತ್ತು ಅವರಗಳ "ಮತ" ಪಡೆಯುವ ದುರುದ್ದೇಶ.

ನನಗೀಗ ಅನಿಸುತ್ತಿರುವುದು, ಗೋಹತ್ಯೆಯ ನಿಷೇದದ ಕಾನೂನು ವಿರೋಧಿಸಿದಂತೆ ನರಹತ್ಯೆ ಕಾನೂನನ್ನು ವಿರೋಧಿಸ ಬೇಕಲ್ಲವೆ? ಏಕೆಂದರೆ ವಯಸ್ಸಾದ ವ್ಯಕ್ತಿಗಳಿಂದಲೂ ಯಾವುದೇ ಉಪಯೋಗವಿರುವುದಿಲ್ಲ. ಬೆಂಗಳೂರಿನಲ್ಲಾದರೆ ಅವರಿಗೆ ವೃದ್ದಾಶ್ರಮವಿದೆ ಹಳ್ಳಿಗಳಲ್ಲಿ ಅವುಗಳಿಲ್ಲವಾದ್ದರಿಂದ ನರಹತ್ಯೆ ನಿಷೇಧವನ್ನು ಹಿಂತೆಗೆದು ಕೊಂಡರೆ ವಯಸ್ಸಾದವರೆಲ್ಲರನ್ನೂ ಸಾಯಿಸಿ ಬಿಟ್ಟರೆ ದೇಶದ ಆರ್ಥಿಕತೆಗೆ ಇಂಬು ಸಿಗುವುದಲ್ಲದೆ ಇವರಿಗೆ ಖರ್ಚು ಮಾಡುವ ಆಹಾರ ನೀರು ಎಲ್ಲವನ್ನೂ ಮಾರಿಕೊಳ್ಳುವುದರಿಂದ ವೈಯಕ್ತಿವಾಗಿ ಅಲ್ಲದೆ ದೇಶಕ್ಕೂ ಲಾಭವಾಗುವುದರಲ್ಲಿ ಸಂಶಯವಿಲ್ಲ. ಇನ್ನೂ ಒಂದು ಲಾಭವೂ ಇದೆ, ಭಾರತದಲ್ಲಿ ಇಂತಹ ಒಂದು ಕಾನೂನು ಬಂದರೆ ಭಯೋತ್ಪಾದನೆಯೂ ಕಡಿಮೆಯಾಗುತ್ತದೆ ಮನುಷ್ಯ ಜೀವಕ್ಕೆ ಬೆಲೆ ಇಲ್ಲದ ಮೇಲೆ ಕೊಲ್ಲುವವರು ಕಡಿಮೆಯಾಗುತ್ತಾರೆ.

ಬಾಳ ಸಂಜೆಯಲ್ಲಿರುವವರಿಗೂ ಮಾಡುವ ಖರ್ಚನ್ನೂ ಹೀಗೆಯೆ ಲೆಕ್ಕ ಹಾಕಿ ನೋಡಿದರೆ ಮುಂದೆ ಅದೂ ಬರಬಹುದು ನೀವೆನಂತೀರಾ?

Tuesday, March 23, 2010

ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ!

ಪ್ರತಿದಿನ ಮಧ್ಯಾಹ್ನ ಊಟಕ್ಕೆ ಬಂದಾಗ ನನಗೆ ಊಟ ಬಡಿಸುವ ಮಧ್ಯೆ ಅಮ್ಮ ಆಗಾಗ ಬಾಗಿಲಿನ ಬಳಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ್ದೆ, ಏಕೆಂದೆ ಕಂಡು ಹಿಡಿಯಲಾಗಿರಲಿಲ್ಲ.

ಅದೊಂದು ದಿನ ಅಮ್ಮ ಹೊರಗೆ ಹೋಗ್ಬೇಕಿದೆ ನಾನು ಅಡುಗೆ ಮಾಡಿಟ್ಟಿರ್ತಿನಿ ಬಡಿಸ್ಕೊಂಡು ಊಟ ಮಾಡಿ ಹೋಗು ಎಂದು ಬೆಳಿಗ್ಗೆಯೆ ಹೇಳಿದ್ದರು.

ಸರಿ ೧೨ ಗಂಟೆಗೆ ಬಂದವನೆ ಊಟ ಮಾಡಲು ಕುಳಿತವನಿಗೊಂದು ಬಾಗಿಲಲ್ಲಿ ಬೀಡಾಡಿ ಹಸುವೊಂದು ಬಂದು ನಿಂತು ಅಂಬಾ ಎಂದು ಕರೆಯಲು ಆರಂಭಿಸಿತು. ಒಂದು ಬಕೆಟ್ ನೀರು ತೆಗೆದು ಕೊಂಡು ಹೋಗಿಟ್ಟೆ ಊಹೂಂ ಮೂಸಿ ನೋಡಲಿಲ್ಲ. ಸರಿ ಹೋಗುತ್ತೆ ಬಿಡು ಎಂದು ಕೊಂಡವನೆ ಊಟ ಮುಗಿಸಿದೆ. ಆಗ ಬಂತು ಅಮ್ಮನ ಕರೆ ಬಾಗಿಲಿಗೆ ಒಂದು ಹಸು ಬಂದು ಅಮ್ಮಾ ಅಂತ ಕರೆಯುತ್ತೆ ಕಣೊ ಅಲ್ಲಿ ಬುಟ್ಟಿಯಲ್ಲಿ ಒಂದೆರಡು ಬಾಳೆಹಣ್ಣಿರುತ್ತೆ ಕೊಟ್ಬಿಡು ಎಂದರು. ಆಗ ಗೊತ್ತಾಯ್ತು ಅಮ್ಮನ ಚಡಪಡಿಕೆಗೆ ಕಾರಣ.

ಇಷ್ಟೆಲ್ಲಾ ನೆನಪಾದದ್ದು, ಈಗ ೪.೩೦ ರ ಸಮಯದಲ್ಲಿ ರಬ್ಬರ್ ಅಂಟಿಹಾಕಿ ಟೈಲ್ಸ್ ನೆಲದ ಮೇಲೆ ಜಾರದಂತೆ ಮಾಡಿ ಬೀಸುವಕಲ್ಲಿನಿಂದ ಬೀಸುತ್ತಿದ್ದ ನಮ್ಮಮ್ಮ, ಅಮ್ಮಾ ಎನ್ನುವ ಆ ಕರೆಗೆ ಬೀಸುವಕಲ್ಲನ್ನು ಬಿಟ್ಟು ಬಾಳೆಹಣ್ಣು ತೆಗೆದು ಕೊಂಡು ಹೋದಾಗ ಎನಿಸಿದ್ದು

ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮ?