Tuesday, December 28, 2010

ಎಲ್ಲಿಂದೆಲ್ಲಿಗೋ ತಲುಪಿದ ಪ್ರವಾಸ

ದೇವನೂರಿನ ಲಕ್ಷ್ಮಿ ರಮಣ


ಜೈಮಿನಿಭಾರತದ ಕರ್ತೃ ಲಕ್ಷ್ಮೀಶ ಕವಿಯ ಸ್ಫೂರ್ತಿಯ ದೇವಸ್ಥಾನ



ಅಯ್ಯನಕೆರೆ, ಸಖರಾಯಪಟ್ಟಣದ ಸಮೀಪ



ತೀರ್ಥಕರೆ ಜಲಪಾತ




ಬಸ್ರಿಕಟ್ಟೆ ಬಾಳೆಹೊಳೆ ಮಧ್ಯೆ ಸಿಗುವ ಸಣ್ಣ ಜಲಧಾರೆ



ಮೇರುತಿಯೆಡೆಗೆ ಹೋಗುವಾಗ



ಕಾಫಿಹಣ್ಣು



ಇಂತದ್ದೇ ಹೂಗಿಡಗಳು ಮೇರುತಿಯಲ್ಲಿ



ಮೇರುತಿಯ ತುತ್ತ ತುದಿಯಲ್ಲಿ ಅಮಿತ್



ಮೇರುತಿ ಹತ್ತಿ ಸುಸ್ತಾಗಿ ಮಲಗಿದ ಅಮಿತ್



ಹೊರನಾಡಿನಲ್ಲಿ ನೆಲದೊಳಗೆ ಅರ್ಧ ಹುದುಗಿ ಕುಳಿತ ಗುಬ್ಬಚ್ಚಿ



ಕೆಮ್ಮಣ್ಣುಗುಂಡಿ ಸಮೀಪದ ಅಬ್ಬೆ ಜಲಪಾತ

ಸಂಪದ › ಬ್ಲಾಗುಗಳು › prasca's blog › ಈ ಸ್ಥಳ ಗುರುತಿಸುವಿರಾ?




೨ ದಿನದ ರಜೆಯಲ್ಲಿ ಮಾಮೂಲಿನಂತೆಯೆ ಚಾರಣಕ್ಕೆ ಹೊರಟಾಗ ಹೊಳೆದದ್ದು, ಹೊರನಾಡು ಪಕ್ಕದಲ್ಲಿರುವ ಮೇರುತಿ ಗುಡ್ಡ. ವಸತಿ ಊಟ ಸೌಲಭ್ಯಕ್ಕೆ ಸಹಾಯವಿತ್ತ ರಾಘವೇಂದ್ರ ನಾವಡರಿಗೆ ಮತ್ತವರ ಸ್ನೇಹಿತ ಸುಂದರ ಅವರಿಗೂ ಧನ್ಯವಾದಗಳು. ಶನಿವಾರ ಬೆಳಿಗ್ಗೆಯೆ ಬೆಂಗಳೂರಿನಿಂದ ಹೊರಟಾಗ ಬೇಗನೆ ಹೊರನಾಡನ್ನು ತಲುಪುವ ಬದಲು ಈ ಕೆರೆಯನ್ನು ಹುಡುಕಿ ಹೊರಟೆ. ಕೊನೆಗೂ ಸಿಕ್ಕ ಈ ಕೆರೆಯ ನೋಟ ರಮಣೀಯ. ಹೆಚ್ಚು ಪ್ರಸಿದ್ದವಲ್ಲ ಆದ್ದರಿಂದಲೇ ಬಹುಶಃ ಇನ್ನೂ ಈ ಪ್ರದೇಶ ನೈರ್ಮಲ್ಯದಿಂದಿದೆ.

Saturday, October 23, 2010

ರಸ್ತೆಯಲ್ಲಿ ಸಿಕ್ಕ ಅಪರೂಪದ ಅತಿಥಿ





ಶರವೇಗದಲ್ಲಿ ಬರುತ್ತಿದ್ದ ವಾಹನಗಳಿಗೆ ಸಿಗದಂತೆ ದಾರಿಗಡ್ಡಲಾಗಿ ನಿಂತು ಅದರ ಗಮ್ಯವನ್ನು ತಲುಪಿಸಲಾಯ್ತು. ಮನುಷ್ಯ ಸ್ವಲ್ಪ ದಯೆ ತೋರಿದರೆ ನಾಗರೀಕ ಸಮಾಜಕ್ಕೆ ಬಲಿಯಾಗುವ ಇಂತಹ ಅದೆಷ್ಟೋ ಪ್ರಾಣಿಗಳ ಜೀವ ಉಳಿಸಬಹುದು.


http://www.youtube.com/watch?v=eP6Jc9RxTpc

Tuesday, October 12, 2010

ಕೊಡಗಿನ ಕಾಫಿ ತೋಟದ ಸುಂದರಿಯರು

ನಮ್ಮ ಪ್ರವಾಸದ ಕೊನೆಯ ತಾಣ, ನಾಗರಹೊಳೆಯಲ್ಲಿ ಹಿಂಡು ಹಿಂಡಾಗಿ ಕಾಣಸಿಗುವ ಚಿಗರೆಗಳು



ಬ್ರಹ್ಮಗಿರಿಯ ತಪ್ಪಲಿನಲ್ಲಿರುವ ಕೊಡಗಿನ ಸುಪ್ರಸಿದ್ದ ಇರ್ಪು ಜಲಪಾತ



ಪ್ರವಾಸದ ತಂಡ, ಚೇಲಾವರದ ಮುಂಭಾಗದಲ್ಲಿ




ಚೆಯ್ಯಾಂಡಣೆಯ ಬಳಿಯ ಚೇಲಾವರದ ಜಲಪಾತ




ಚೇಲಾವರ ಫಾಲ್ಸ್ ಉಂಟಾಗುವ ಸ್ಥಳದಲ್ಲಿ ಕಾಣುವ ನೋಟ


ಮಾದಂಡಬ್ಬಿ ಜಲಪಾತ


ಇಗ್ಗುತ್ತಪ್ಪ ದೇವಸ್ಥಾನದಿಂದ ಕಾಣುವ ಜಲಪಾತ. ಇದೂ ಕೂಡ ಮುಂಭಾಗದಿಂದ ಫೋಟೊ ತೆಗೆಯಲು ಕಾಡಿನಲ್ಲಿ ಇಲ್ಲದ ದಾರಿಯಲ್ಲಿ ಚಾರಣ ಕೈಗೊಳ್ಳ ಬೇಕು



ಪಾಡಿ ಇಗ್ಗುತ್ತಪ್ಪ ದೇವಸ್ಥಾನದ ಬಳಿ ಕಂಡ ತಾವರೆ, ಇದು ಕಂಡದ್ದು ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿದ ದಿನ. ಹಾಂ! ಕೊಡಗು ಪ್ರವಾಸದಲ್ಲಿ ಯಾವುದೇ ವಾರ್ತೆಗಳು ನಮ್ಮ ಕಿವಿಗೆ ಬೀಳಲಿಲ್ಲ ರಾಜಕೀಯ ನಾಟಕಗಳಂತೂ ದೂರವೇ ಉಳಿದಿತ್ತು.
ಅಬ್ಬಿ ಜಲಪಾತದ ಪೂರ್ಣ ದೃಶ್ಯ


ಮಾಂದಾಲಪಟ್ಟಿ, ಪುಷ್ಪಗಿರಿ ಶ್ರೇಣಿಯ ಬೆಟ್ಟದ ಶಿಖರ. ಸುಂದರ ಮನಮೋಹಕ ದೃಶ್ಯಗಳನ್ನೊಳಗೊಂದ ಬೆಟ್ಟ ಸಾಲು


ಕೊಡಗಿನ ಅತ್ಯಂತ ಪ್ರಸಿದ್ದ ಅಬ್ಬಿ ಜಲಪಾತ. ಮಡಿಕೇರಿಯ ಮೋರಿ ನೀರು ಇದರಲ್ಲಿ ಸೇರುತ್ತದೆ ಎಂಬುದು ಕೆಲವರ ಆರೋಪ.
ನಾಪಂಡಪೊಳೆ, ರಸ್ತೆ ಪಕ್ಕದಲ್ಲಿಯೆ ಸಿಗುವ ಜಲಪಾತ. ಹೆಚ್ಚು ಪ್ರಸಿದ್ದವಲ್ಲ ಕೊಡಗಿನ ಜಲಪಾತ. ಜಲಪಾತವೆನ್ನುವುದು ಸೂಕ್ತವಲ್ಲವೆನೋ? ಸ್ವಲ್ಪ ಕಡಿದಾದ ಇಳಿಜಾರಿನ ಜಾರಿ ಬರುವ ಹೊಳೆ ಕೊನೆಯಲ್ಲಿ ಚಿಕ್ಕದಾಗಿ ಧುಮುಕುತ್ತದೆ. ಆದರೂ ಒಮ್ಮೆ ನೋಡಬೇಕಾದ ಜಲಪಾತ!



ಅದೇ ಹೊಳೆ ಹರಿದು ಮತ್ತೊಂದು ಜಾಗದಲ್ಲಿ ಸಣ್ಣ ಬಂಡೆಯ ಮೇಲೆ ಹರಿವ ಪರಿ. ರಾತ್ರಿ ಡೇರೆ ಹಾಕಿ ತಂಗಲು ಪ್ರಶಸ್ಥವಾದ ಸ್ಥಳ ಎಂಬುದು ನನ್ನ ಅನಿಸಿಕೆ.


ಜಲಪಾತದ ಮೇಲ್ಭಾಗದಿಂದ ತೆಗೆದ ಫೋಟೊ.



ಕೋಟೆ ಬೆಟ್ಟದ ಸಮೀಪವಿರುವ ಹೆಸರು ಗೊತ್ತಿಲ್ಲದ ಜಲಪಾತ. ಮುಂಭಾಗದಿಂದ ಫೋಟೊ ತೆಗೆಯುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ನಡೆದು ಸೇರಿದ್ದು ಜಲಪಾತದ ಮೇಲ್ಭಾಗ. ಅಲ್ಲಿಂದ ಕೆಳಗಿಳಿದು ಛಾಯಾಚಿತ್ರ ತೆಗೆಯಲು ಸಾಧ್ಯವಾಗಲಿಲ್ಲ.

ಎಲ್ಲ ಚಿತ್ರಗಳನ್ನು ನೋಡಲು ಇಲ್ಲಿ ಭೇಟಿ ಕೊಡಿ

Wednesday, July 28, 2010

ಹಿಂದೂ ಎನ್ನಲು ಹಿಂಜರಿಕೆಯೇಕೆ?

ನಿಮ್ಮ ಊಹೆ ಸರಿ ಹಿಂದೂಗಳ ಸಂಕೋಚ ಸ್ವಭಾವದ ಬಗ್ಗೆಯೆ ನಾನು ಕೇಳುತ್ತಿರುವುದು. ಅಲ್ಲ ಈ ಹಿಂದೂಗಳಿಗೇನಾಗಿದೆ? ತಾನು ಹಿಂದೂ ಹೆಮ್ಮೆಯಿಂದ ಹೇಳಿಕೊಳ್ಳುವುದಿರಲಿ, ಅದಕ್ಕೆ ನಾಚಿಕೆ ಪಟ್ಟುಕೊಳ್ಳುವುದೇಕೆ?
ಯಾವುದಾದರೂ ಚರ್ಚೆಯಲ್ಲಿ ಭಾಗವಹಿಸಿದ ಬಹುತೇಕ ಹಿಂದೂಗಳನ್ನು ಗಮನಿಸಿ ಹಿಂದೂಗಳ ಪರವಾಗಿ ಮಾತನಾಡಲು ಹಿಂಜರಿಯುತ್ತಾರೆ. ನಾನು ಜಾತ್ಯಾತೀತ (ಧರ್ಮಾತೀತ ಅಥವ ಸೆಕ್ಯುಲರ್) ಎಂದೇ ಬಿಂಬಿಸಿಕೊಳ್ಳಲು ಇಚ್ಚಿಸುತ್ತಾರೆ. ನಾವು ಬಲಪಂಥೀಯರಲ್ಲ ಎಡಪಂಥೀಯರೂ ಅಲ್ಲ ನಡುಪಂಥೀಯರೆಂದು ಇತ್ತೀಚೆಗೆ ಹೇಳಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಏಕೆ ಹೀಗೆ? ಹಿಂದೂ ಎನ್ನುವುದು ಅಸ್ಪೃಷ್ಯವೆ? ಹೀಗೆ ಹಿಂಜರಿಕೆ ಬೆಳೆಸಿಕೊಳ್ಳಲು ಹಿಂದೂಗಳು ಮಾಡಿರುವ ಅಂತಹ ಅಪರಾಧ ಯಾವುದು?
ಇರಬಹುದು ನಮ್ಮಲ್ಲೂ ಕೆಲವು ಕೆಟ್ಟ ಆಚರಣೆಗಳು ಬೆಳೆದು ಬಂದಿರಬಹುದು ಎಲ್ಲ ಧರ್ಮಗಳಲ್ಲೂ (ಧರ್ಮ ಮತ ಪಂಥ ಎಂಬ ವಿಭಿನ್ನ ಪದಗಳನ್ನು ಬಳಸಿಲ್ಲ, ಸಾಮಾನ್ಯ ಮನುಷ್ಯನಾಗಿ ಧರ್ಮವೆಂದು ಕರೆದಿದ್ದೇನೆ) ಇರುವ ಅಥ ಇರದ ಹುಳುಕುಗಳು ಹಿಂದೂ ಪದ್ದತಿಯಲ್ಲಿ ಬೆಳೆದು ಬಂದಿರಬಹುದು, ಅದೇ ಸಮಯಕ್ಕೆ ಅಂತಹ ಕೆಟ್ತ ಪದ್ದತಿಯನ್ನು ಮೈಕೊಡವಿಕೊಂಡು ಹಿಂದೆ ಬಿಡುವುದಕ್ಕೆ ಬದಲಾವಣೆಗೊಳ್ಳುವುದಕ್ಕೆ ತೆರೆದು ಕೊಂಡಿರುವ ಏಕೈಕ ಧರ್ಮ ಹಿಂದುತ್ವ. ಯಾರನ್ನೂ ನೋಯಿಸದ ದೇವಸ್ಥಾನಕ್ಕೆ ಬರಲೇ ಬೇಕು, ವಾರಕ್ಕೊಮ್ಮೆಯಾದರೂ ಪ್ರಾರ್ಥನೆ ಮಾಡಲೇ ಬೇಕು ಎನ್ನುವ ಯಾವುದೇ ಕಟ್ಟು ಪಾಡುಗಳಿಲ್ಲದೆ ಕೊನೆಗೆ ದೇವರಲ್ಲಿ ನಂಬಿಕೆಯಿಲ್ಲದಿದ್ದರೂ ಒಪ್ಪಿಕೊಳ್ಳುವ ಏಕೈಕ ಧರ್ಮ ಆದರೂ ಈ ಹಿಂಜರಿಕೆ ಏಕೆ? ವಿಜ್ಞಾನವನ್ನು ಸತ್ಯವನ್ನು ಒಪ್ಪಿಕೊಳ್ಳುವ ಒಳ್ಳೆಯದು ಎಲ್ಲ ಕಡೆಯಿಂದಲೂ ಬರಲಿ ಎನ್ನುವ ಧ್ಯೇಯೋದ್ದೇಶ ಹೊಂದಿರುವುದು ತಪ್ಪೆ? ಎಲ್ಲರನ್ನೂ ತನ್ನಂತೆ ಕಾಣುವ ವಿಶಾಲ ಮನೋಭಾವದಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ತಂದು ಕೊಂಡಿದ್ದರೂ ನಮಗೇಕೆ ಇನ್ನೂ ಬುದ್ದಿ ಬಂದಿಲ್ಲ? ಭಾರತದಿಂದ ಹೊರದೂಡಲ್ಪಟ್ಟರೆ ಹಿಂದೂಗಳಿಗೆ ಆಶ್ರಯ ಎಲ್ಲಿ? ಆರೆಸ್ಸೆಸ್ ಎಂದಾಕ್ಷಣ ಹಾವು ಮೇಲೆ ಬಿದ್ದವರಂತೆ ಹೌಹಾರುವುದೇಕೆ? ಅವರು ಎಷ್ಟು ಜನರನ್ನು ಬಾಂಬಿಟ್ಟು ಉಡಾಯಿಸಿದ್ದಾರೆ? ಇತರರನ್ನು ನೋಡಿ ಕಲಿಯಬಾರದೇಕೆ? ಈಗಾಗಲೆ ಅಫ್ಗಾನಿಸ್ತಾನದಿಂದ ದೆಹಲಿಯವರೆಗೆ ನಮಗೆ ಹಿಂಜರಿತ ಉಂಟಾಗಿದೆ ಈಶಾನ್ಯ ರಾಜ್ಯಗಳು ಈಗಾಗಲೆ ಕ್ರಿಶ್ಚಿಯನ್ ಮಯವಾಗಿವೆ. ಕೇರಳ ಸಧ್ಯದಲ್ಲೆ ಮುಸ್ಲಿಂ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಉತ್ತರಪ್ರದೇಶದಲ್ಲಿ ೫೨% ಇರುವ ಮುಸ್ಲಿಮರು ಅಲ್ಪ ಸಂಖ್ಯಾತರಲ್ಲ ಎಂದು ಅಲ್ಲಿನ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಬಿಹಾರದಲ್ಲಿ ಮುಸ್ಲಿಮನೊಬ್ಬನನ್ನು ಮುಖ್ಯಮಂತ್ರಿಯಾಗಲೂ ಸರ್ವ ಸರ್ಕಾರಗಳಲ್ಲೂ ಮಂತ್ರಿಗಿರಿ ಗಿಟ್ಟಿಸುವವನೊಬ್ಬ ಪ್ರಯತ್ನಿಸುತ್ತಾನೆ.

ಭಯೋತ್ಪಾದಕರನ್ನೆ ಸಮರ್ಥಿಸುವ ಝಾಕಿರ್ ನಮಗೆ ಮಾದರಿಯಾಗದಿದ್ದರೂ ಆಸ್ಟ್ರೇಲಿಯಾದ ಪ್ರಧಾನಿ ನಮ್ಮದು ಕ್ರಿಶ್ಚಿಯನ್ ದೇಶ ಇಲ್ಲಿ ನಮ್ಮಂತೆ ನಡೆಯುವುದಿದ್ದರೆ ಬನ್ನಿ ಎನ್ನುವ ಅವರ ಮಾತುಗಳು ನಮಗೆ ಮಾದರಿಯಾಗಬೇಕಲ್ಲವೆ?

Tuesday, June 29, 2010

ಹೊರನಾಡಿನ ಸುತ್ತ ಮುತ್ತ

ಹೊರನಾಡಿನ ಸುತ್ತಮುತ್ತ ಸಾಕಷ್ಟು ಆಕರ್ಷಕ ಪ್ರದೇಶಗಳಿವೆಯೆಂದು ತಿಳಿದಾಗಲಿಂದ ಹೋಗಲೇ ಬೇಕೆನ್ನುವ ನನ್ನ ತವಕ ತೀರಿದ್ದು ಮೇ ೯-೧೧ ರವರೆಗೆ ಅಲ್ಲೆಲ್ಲ ಓಡಾಡಿ ಬಂದಾಗ. ಊಟ ಮತ್ತು ವಸತಿ ಸೌಕರ್ಯ ಒದಗಿಸಿಕೊಟ್ಟು ನನ್ನ ಕೊರೆತವನ್ನೂ ಸಹಿಸಿಕೊಂಡ ಶ್ರೀ ರಾಘವೇಂದ್ರ ನಾವಡರು ಮತ್ತು ಶ್ರೀಮತಿ ಮಂಜುಳ ನಾವಡ ಅವರಿಗೆ ಧನ್ಯವಾದಗಳು.





ನನ್ನ ಹುಚ್ಚಿಗೆ ಬಲಿಯಾದವರು





ದುರ್ಗದ ದಾರಿಯಲ್ಲಿ




ದುರ್ಗದ ಕಡೆಗೆ ನಡಿಗೆ





ದುರ್ಗದಿಂದ ಮನಮೋಹಕ ದೃಶ್ಯ




ಇಂತಹ ಹೂಗಳು ನಾಡಿನಲ್ಲೇಕೆ ಕಾಣುವುದಿಲ್ಲ???




ಕಟ್ಟಿ ತಂದ ಬುತ್ತಿಯ ವನಭೋಜನ





ದೂರದಲ್ಲಿ ಕಾಣುವ ದುರ್ಗ, ನಮ್ಮ ಗುರಿ



ದುರ್ಗದಹಳ್ಳಿಯಿಂದ ಹಿಂತಿರುಗುವಾಗ ಸಿಗುವ ದೇವಳದ ಬಳಿ ಕಂಡ ಪುರಾತನ ಸಂಪಿಗೆ ಮರ



ಬಲ್ಲಾಳರಾಯನ ದುರ್ಗದ ದಾರಿಯಲ್ಲಿ ಬಂಗಾಡಿ ಮತ್ತು ಕಿಲ್ಲೂರು ಇಲ್ಲಿಂದ ವೀಕ್ಷಣೆಗೆ ಲಭ್ಯ




ಒಂದು ತುದಿಯಿಂದ ಮತ್ತೊಂದು ತುದಿಗೆ ಹೋದಾಗ ನಮ್ಮ ಜೀಪ್ ಕಂಡಿದ್ದು ಹೀಗೆ ಹಸಿರಿನ ಮಧ್ಯೆ ಕರಗಿ ಹೋದ ಜೀಪ್





ಕ್ಯಾತನಮಕ್ಕಿಯಿಂದ ಒಂದು ಹಸಿರು ನೋಟ





ಕಾಡಿನ ನಡುವೆ ನಾವೂ ಪ್ರಾಣಿಗಳಲ್ವೆ? ಅದಕ್ಕೆ ಹೀಗೆ




ವನಸುಮ




ಕ್ಯಾತನಮಕ್ಕಿಯಿಂದ ಕೆಳಗಿಳಿದು ನಡೆದಾಗ ಸಿಕ್ಕ ಸಣ್ಣ ಝರಿ




ಕಳಸದ ಸಮೀಪ ನಮ್ಮ ಜೀಪ್ ಚಾಲಕ ಮತ್ತು ಮಾರ್ಗ ದರ್ಶಕ ’ದೊರೆ’ ತೋರಿಸಿದ ಜಲಪಾತ ಹೆಸರಿಲ್ಲ (ಅವನಿಗೂ ಹತ್ತಿರದ ಮನೆಯವರಿಗೂ ಗೊತ್ತಿಲ್ಲ)




ಹೊರ ನಾಡಿನ ಸಮೀಪದ ಭದ್ರೆಯ ತೂಗು ಸೇತುವೆ ಬಳಿ,
ಇಲ್ಲಿ ನೀರಿನಲ್ಲಿ ಹಾವು ಕಂಡ ಅಮಿತ್ ಮತ್ತು ರಿಷಿ ಓಡಿದ್ದು ನೆನಪಿಸಿಕೊಂಡ್ರೆ ಈಗ್ಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತೆ




ಅಂಬಾತೀರ್ಥ ಬಳಿ ಕಾಣುವ ನಿಸರ್ಗ ಕೊರೆದ ಕಲೆ


ಅಂಬಾತೀರ್ಥದ ಭದ್ರೆ


ಅಂಬಾತೀರ್ಥದಲ್ಲಿನ ಬಂಡೆಗಳಲ್ಲಿ ಮೂಡಿದ ಮನಮೋಹಕ ಕಲೆ, ಹೊರನಾಡಿನ ಸಮೀಪ


ಶೃಂಗೇರಿಯ ಸಮೀಪದ ಮಗೇಬೈಲು ಜಲಪಾತದ ಬಳಿ ಅಮಿತ್ ಮತ್ತು ರಿಷಿ



ಹೊರನಾಡಿನ ಸಮೀಪ ಕ್ಯಾತನಮಕ್ಕಿ