Tuesday, March 1, 2011

ವೇದಗಳೇಕೆ ಎಲ್ಲ ಜನಕ್ಕೆ ಸಿಗಲಿಲ್ಲ!

ಪ್ರೊ ಕೆ ಎಸ್ ನಾರಾಯಣಾಚಾರ್ಯರ ವೇದ ಸಂಸ್ಕೃತಿಯ ಪರಿಚಯ ಸಂಪುಟ-೨ ಓದುತ್ತಿದ್ದಾಗ ನನಗೆ ಹೊಳೆದದ್ದು. ವೇದಗಳನ್ನು ಮುಚ್ಚಿಟ್ಟರು, ಅದು ತಪ್ಪು. ಜ್ಞಾನ ಎಲ್ಲರಿಗೂ ಹಂಚಬೇಕಿತ್ತು ಎನ್ನುವುದು ಎಲ್ಲರೂ ಮಾಡುವ ವಾದ ಅಲ್ಲವೆ?

ಆದರೆ ಸರಿಯಾದ ಶಿಷ್ಯ ಸಿಗದ ಹೊರತು ವೇದಗಳನ್ನು ಕೊಡತಕ್ಕುದಲ್ಲ ಎನ್ನುತ್ತದೆ ಈ ಮಂತ್ರ

ಊಷರೇ ನಿವಪೇತ್ ಬೀಜಂ ಶಣ್ದೇ ಕನ್ಯಾಂ ಪ್ರಯೋಜಯೇತ್|
ಸೃಜೇದ್ವಾ ವಾನರೇ ಮಾಲಾಂ ನಾಪಾತ್ರೇ ಶಾಸ್ತ್ರಮುತ್ಸೃಜೇತ್|| (ಶಾಂಡಿಲ್ಯ ಸ್ಮೃತಿ Vi-258)

"ಬಂಜರು ಭೂಮಿಯಲ್ಲಿ ಬೇಕಾದರೂ ಬೀಜಗಳನ್ನು ಬಿತ್ತಬಹುದು, ಷಂಡನಿಗಾದರೂ ಕನ್ಯೆಯನ್ನು ಕೊಡಬಹುದು. ಮಂಗನ ಕೈಯಲ್ಲಿ ಮಾಲೆಯನ್ನಾದರೂ ಕೊಡಬಹುದು, ಆದರೆ ವಿದ್ಯೆಯನ್ನು ಎಂತಹ ಆಪತ್ಕಾಲದಲ್ಲಿಯೂ ಅಪಾತ್ರನಿಗೆ ಕೊಡತಕ್ಕದ್ದಲ್ಲ". ಗುರುವಿನ ಶರೀರದೊಡನೆಯೆ ಭಸ್ಮವಾಗಿ ಹೋದರೂ ಸರಿಯೆ.

ನಾಚೀಕೇತವಿದ್ಯೆಯನ್ನು ವಿವರಿಸುವಾಗ ಬಂದಿರುವ ಉಲ್ಲೇಖಗಳಿವು.

ವೇದಗಳ ಬಗ್ಗೆ ನನಗೇನೂ ತಿಳಿದಿಲ್ಲ. ತಿಳಿದುಕೊಳ್ಳುವ ಕುತೂಹಲವಿದೆ.

No comments: