Tuesday, June 7, 2011

ಕೇಂದ್ರ ಸರ್ಕಾರದ ನೀತಿಗಳು

ನಮ್ಮ ದೇಶದ ವಿರುದ್ದ ಹೋರಾಡುವ ಕಲ್ಲು ಹೊಡೆಸುವ ಗಿಲಾನಿ ದೆಹಲಿಗೆ ಬಂದರೆ ಕೆಂಪುಹಾಸಿನ ಸ್ವಾಗತ ಸಿಗುತ್ತೆ.
ಅಣ್ಣಾ ಹಜಾರೆ, ರಾಮ್ದೇವ್ ಬ್ರಷ್ಟಾಚಾರ ಕಪ್ಪುಹಣದ ವಿರುದ್ದ ಹೋರಾಡಿದ್ರೆ ಕತ್ತು ಹಿಡಿದು ಆಚೆ ನೂಕುತ್ತೆ.

ಕೇಂದ್ರ ಸರ್ಕಾರದ ಸ್ನೇಹಿತರು, ಎ.ರಾಜ, ಕನಿಮೋಳಿ, ಸುರೇಶ್ ಕಲ್ಮಾಡಿ, ದಯಾನಿಧಿ ಮಾರನ್, ಅಶೋಕ್ ಚವ್ಹಾಣ್, ಪಿ ಜೆ ಥಾಮಸ್.

ಶತ್ರುಗಳು ಅಣ್ಣಾಹಜಾರೆ, ರಾಮದೇವ್, ಅರವಿಂದ್ ಕೇಜ್ರಿವಾಲ, ಕಿರಣ್ ಬೇಡಿ, ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್.

ಒಂದು ಮಾತಿದೆ ಅವನು ಓದುವ ಪುಸ್ತಕ ತೋರಿಸು ಅವ್ನು ಎಂತವನು ಅಂತ ಹೇಳುತ್ತೇನೆ ಎಂದು. ಹಾಗೆಯೆ ನನಗನ್ನಿಸುತ್ತೆ ಅವನ ಮಿತ್ರರನ್ನು ತೋರಿಸು ಅವ್ನು ಎಂತಹವನು ಎಂದು ಹೇಳುತ್ತೇನೆಂದರೆ ಕಾಂಗ್ರೆಸ್ನ ಸ್ತಿತಿ ಏನಾಗ್ಬೇಕು?

ಇದೀಗ ತಾನೆ ದಿಗ್ವಿಜಯ್ ಸಿಂಗ್ ಎಂಬ ತಲೆತಿರುಕ ಒತ್ತಾಯಿಸುತ್ತಿದ್ದ, ರಾಜ್ಘಾಟ್ನಲ್ಲಿ ನೃತ್ಯ ಮಾಡಿದ್ದಕ್ಕೆ ಸುಷ್ಮಾ ಸ್ವರಾಜ್ ದೇಶದ ಕ್ಷಮೆ ಕೇಳ್ಬೇಕು ಅಂತ. ಎಂತ ವಿಪರ್ಯಾಸ ನೋಡಿ ರಾತ್ರೊ ರಾತ್ರಿ ಹೆಂಗಸರನ್ನು, ಮಕ್ಕಳನ್ನು ಲಾಠಿ ಏಟು ಕೊಟ್ಟ ನಿರ್ಮಾನುಷವಾಗಿ ಮಧ್ಯರಾತ್ರಿ ಪೆಂಡಾಲಿನಿಂದ ಹೊರಗಟ್ಟಿದ ಲಜ್ಜೆಗೆಟ್ಟವರು ಕ್ಷಮೆ ಕೇಳಬೇಕಿಲ್ಲ ಆದರೆ ಇವರು ಮಾಡಿದ್ದನ್ನ ಪ್ರಶ್ನಿಸಿದವರು ಕ್ಷಮೆ ಕೇಳ್ಬೇಕು. ಕಾಂಗ್ರೆಸ್ನ ನೀತಿಯೇ ಹೀಗಲ್ವ? ಅವರನ್ನು ಇಷ್ಟು ವರ್ಷಗಳ ಕಾಲ ಗೆಲ್ಸಿ ಅವರಿಂದ ಆಳಿಸಿಕೊಂಡಿದ್ದೇವಲ್ವ ನಮಗೆಲ್ಲ ಇದು ಸರಿಯಾದ ಶಿಕ್ಷೆಯೆ ಅಲ್ವೆ? we deserve it ಪಾಪ ಅವ್ರದ್ದೇನು ತಪ್ಪು.

No comments: