http://www.youtube.com/watch?v=eP6Jc9RxTpc
Saturday, October 23, 2010
ರಸ್ತೆಯಲ್ಲಿ ಸಿಕ್ಕ ಅಪರೂಪದ ಅತಿಥಿ
http://www.youtube.com/watch?v=eP6Jc9RxTpc
Tuesday, October 12, 2010
ಕೊಡಗಿನ ಕಾಫಿ ತೋಟದ ಸುಂದರಿಯರು
ಎಲ್ಲ ಚಿತ್ರಗಳನ್ನು ನೋಡಲು ಇಲ್ಲಿ ಭೇಟಿ ಕೊಡಿ
Wednesday, July 28, 2010
ಹಿಂದೂ ಎನ್ನಲು ಹಿಂಜರಿಕೆಯೇಕೆ?
ಯಾವುದಾದರೂ ಚರ್ಚೆಯಲ್ಲಿ ಭಾಗವಹಿಸಿದ ಬಹುತೇಕ ಹಿಂದೂಗಳನ್ನು ಗಮನಿಸಿ ಹಿಂದೂಗಳ ಪರವಾಗಿ ಮಾತನಾಡಲು ಹಿಂಜರಿಯುತ್ತಾರೆ. ನಾನು ಜಾತ್ಯಾತೀತ (ಧರ್ಮಾತೀತ ಅಥವ ಸೆಕ್ಯುಲರ್) ಎಂದೇ ಬಿಂಬಿಸಿಕೊಳ್ಳಲು ಇಚ್ಚಿಸುತ್ತಾರೆ. ನಾವು ಬಲಪಂಥೀಯರಲ್ಲ ಎಡಪಂಥೀಯರೂ ಅಲ್ಲ ನಡುಪಂಥೀಯರೆಂದು ಇತ್ತೀಚೆಗೆ ಹೇಳಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಏಕೆ ಹೀಗೆ? ಹಿಂದೂ ಎನ್ನುವುದು ಅಸ್ಪೃಷ್ಯವೆ? ಹೀಗೆ ಹಿಂಜರಿಕೆ ಬೆಳೆಸಿಕೊಳ್ಳಲು ಹಿಂದೂಗಳು ಮಾಡಿರುವ ಅಂತಹ ಅಪರಾಧ ಯಾವುದು?
ಭಯೋತ್ಪಾದಕರನ್ನೆ ಸಮರ್ಥಿಸುವ ಝಾಕಿರ್ ನಮಗೆ ಮಾದರಿಯಾಗದಿದ್ದರೂ ಆಸ್ಟ್ರೇಲಿಯಾದ ಪ್ರಧಾನಿ ನಮ್ಮದು ಕ್ರಿಶ್ಚಿಯನ್ ದೇಶ ಇಲ್ಲಿ ನಮ್ಮಂತೆ ನಡೆಯುವುದಿದ್ದರೆ ಬನ್ನಿ ಎನ್ನುವ ಅವರ ಮಾತುಗಳು ನಮಗೆ ಮಾದರಿಯಾಗಬೇಕಲ್ಲವೆ?
Tuesday, June 29, 2010
ಹೊರನಾಡಿನ ಸುತ್ತ ಮುತ್ತ
ಕಳಸದ ಸಮೀಪ ನಮ್ಮ ಜೀಪ್ ಚಾಲಕ ಮತ್ತು ಮಾರ್ಗ ದರ್ಶಕ ’ದೊರೆ’ ತೋರಿಸಿದ ಜಲಪಾತ ಹೆಸರಿಲ್ಲ (ಅವನಿಗೂ ಹತ್ತಿರದ ಮನೆಯವರಿಗೂ ಗೊತ್ತಿಲ್ಲ)
ಹೊರ ನಾಡಿನ ಸಮೀಪದ ಭದ್ರೆಯ ತೂಗು ಸೇತುವೆ ಬಳಿ,
ಇಲ್ಲಿ ನೀರಿನಲ್ಲಿ ಹಾವು ಕಂಡ ಅಮಿತ್ ಮತ್ತು ರಿಷಿ ಓಡಿದ್ದು ನೆನಪಿಸಿಕೊಂಡ್ರೆ ಈಗ್ಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತೆ
Friday, April 16, 2010
ಬೆಂಗಳೂರಿನ ಹುಡುಗಿಯರ ಬಗ್ಗೆ ...............
ಮೊನ್ನೆ ಅಂಬೇಡ್ಕರ್ ಜಯಂತಿಯಂದು ಕುಣಿಗಲ್ ಸಮೀಪದ ಮಾರ್ಕೋನಹಳ್ಳಿ ಜಲಾಶಯದಲ್ಲಿ ನೀರಿನಲ್ಲಿ ಕುಣಿದಾಡಿ ಹಿಂತಿರುಗಿ ಬರುವಾಗ ಕಂಡ ಲಾರಿಯೊಂದರ ಹಿಂಬದಿ ಬರಹ. ಚಿತ್ರ ತೆಗೆಯಲು ಸ್ಫೂರ್ತಿ ಸೋಮಾರಿ ಕಟ್ಟೆ ಶಂಕರಪ್ರಸಾದ.
Thursday, March 25, 2010
ನರಹತ್ಯೆಯ ಅಜೆಂಡಾ ಹೀಗೊಂದು ವಿಡಂಬನೆ
ಗೋಹತ್ಯೆಯ ನಿಷೇಧ ಕಾನೂನು ಜಾರಿಗೆ ಬಂದದ್ದರಿಂದ ಕೆಲವರಿಗೆ ಕಣ್ಣುರಿ ಮೈ ಉರಿ ಬಂದು ಪರಚಿಕೊಳ್ಳುತ್ತ ಬಾಯಿಗೆ ಬಂದಂತೆ ಮಾತನಾಡುತ್ತಾ ಅದನ್ನು ವಿರೋಧಿಸುವುದು ನೋಡುತ್ತಿದ್ದರೆ, ಇವರ ಈ ಮಾತುಗಳು ಲೇಖನಗಳ ಹಿಂದಿರುವ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತಿಲ್ಲ.
ಗೋಹತ್ಯೆಯನ್ನು ಮಾಡೀಯೆ ತೀರಬೇಕೆಂದು ಇವರೇಕೆ ಇಷ್ಟು ಮುತುವರ್ಜಿ ವಹಿಸುತ್ತಿದ್ದಾರೆ? ಇನ್ನು ಕೆಲವು ಪುಣ್ಯಾತ್ಮರು ವಯಸ್ಸಾದ ದನಗಳನ್ನು ಮನೆಯಲ್ಲಿಟ್ಟುಕೊಳ್ಳಬೇಕೆ ಎಂದು ಕೇಳಿದ್ದಾರೆ. ದನಗಳನ್ನು ಮನೆಯಲ್ಲಿಟ್ಟುಕೊಂಡರೆ ಆಗುವ ನಷ್ಟವನ್ನು ಪೈಸೆಗಳ ಲೆಕ್ಕದಲ್ಲಿ ಕೊಡುತ್ತಾರೆ.
ನಾವಂತೂ ಬಾಲ್ಯದಲ್ಲಿ ಹಸು ಎಮ್ಮೆ ಕರುಗಳನ್ನು ಹಾಸಿಗೆಯಲ್ಲಿ ಮಲಗಿಸಿಕೊಂಡೆ ಮಲಗಿದ್ದೆವು. ಎಂದಿಗೂ ಮನೆಯ ದನಗಳನ್ನು ಕಟುಕರಿಗೆ ಮಾರಿದ್ದಿಲ್ಲ. ವಯಸ್ಸಾದರೆ ಮಾರಬೇಕನ್ನುವ ಇವರ ಬಾಯಿ ಚಪಲ ಆಗ ನಮ್ಮಲ್ಯಾರಿಗೂ ಇರಲೇ ಇಲ್ಲ. ಮಾರುತ್ತೇನೆಂದರೂ ಮನೆಯ ಹಿರಿಯರು ಬೈಯುತ್ತಿದ್ದದ್ದು ಹೀಗೆ, "ಒಂದು ಹೊರೆ ಹುಲ್ಲು ಒಂದು ತಂಬಿಗೆ ನೀರು" ಅದಕ್ಕಿನ್ನೇನು ಬೇಕು ಅದನ್ಯಾಕೆ ಮಾರ್ತೀಯ ನಮ್ಮನೆಲೆ ಸಾಯ್ಲಿ ಬಿಡು. ಸತ್ರೆ ತೋಟಕ್ಕೆ ಗೊಬ್ಬರ ಆಗುತ್ತೆ ಇಲ್ಲಾಂದ್ರೆ ನಾಯಿ ನರಿಗಳಿಗೆ ಆಹಾರ ಎಂದು ಈಗಲೂ ನನ್ನೂರಿನಲ್ಲಿ ಹೇಳುತ್ತಾರೆ.
ನನ್ನೂರಿನಲ್ಲಿ ಇಂದಿಗೂ ನಡೆಯುವ ದನದ ಜಾತ್ರೆಗೆ ಕಟುಕರನ್ನು ಬರಲು ಬಿಡುವುದಿಲ್ಲ. ಬಂದರೂ ಎಷ್ಟೆ ಹಣ ಕೊಡುತ್ತೇನೆಂದರೂ ರೈತ ಅವನ್ನು ಕೊಡುವುದಿಲ್ಲ. ವಯಸ್ಸಾದ ರಾಸುಗಳನ್ನು ಮಾರುವುದಕ್ಕೆ ತರುವುದೇ ಇಲ್ಲ. ಕಟುಕರಿಗೆ ಮಾರಬಾರದೆಂದು ಕೆಲವರು ಕರಪತ್ರದ ಮೂಲಕ ಮತ್ತು ಬೀದಿ ನಾಟಕಗಳ ಮೂಲಕ ಜಾಗೃತಿ ಉಂಟು ಮಾಡುತ್ತಾರೆ.
ಕಳೆದ ೧೦ ವರ್ಷಗಳವರೆಗೂ ರಾಸುಗಳನ್ನು ಲಾರಿಯಲ್ಲಿ ಸಾಗಿಸುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಉತ್ತರ ಕರ್ನಾಟಕದವರೆಗೂ ನೂರಾರು ಕಿಮೀಗಳನ್ನು ನಡೆಸಿಕೊಂಡೆ ಹೋಗುವವರನ್ನು ಕಣ್ಣಾರೆ ಕಂಡಿದ್ದೇನೆ.
ಗೋಹತ್ಯೆಯ ನಿಷೇಧ ಹಿಂದೂಗಳ ಅಜೆಂಡ ಎಂದೆ ಇವರುಗಳು ಇಷ್ಟು ಶತಾಯಗತಾಯ ವಿರೋಧಿಸುವುದು. ನೀವು ಗಮನಿಸಿರಬಹುದು, ಎಲ್ಲದಕ್ಕೂ ರೈತನನ್ನು ಇಲ್ಲವಾದರೆ ದಲಿತನನ್ನು ಎಳೆದು ತರಲಾಗುತ್ತದೆ. ಇಲ್ಲಿ ನಿಜವಾದ ರೈತ ಮತ್ತು ದಲಿತ ತಮ್ಮ ಪಾಡಿಗೆ ತಾವಿದ್ದಾರೆ. ಅವೆರಡು ಈಗ ಸಧ್ಯ ಇರುವ ಸರ್ಕಾರವನ್ನು ಸುಲಭವಾಗಿ ಹೆದರಿಸಲು ಬಳಸುತ್ತಿರುವ ಬೆದರು ಬೊಂಬೆಗಳು. ಗಾಂಧಿಯನ್ನು ಎಲ್ಲದಕ್ಕೂ ಎಳೆದು ತರುವ ಇವರು ಅವಕಾಶ ರಾಜಕಾರಣ ಅನುಕೂಲ ಸಿಂಧು ತಂತ್ರಕ್ಕೆ ಹೆಸರಾದವರುಗಳು. ಗಾಂಧಿ ಬೇಕಾದಾಗ ಗಾಂಧಿ ರೈತ ಬೇಕಾದ ಕಡೆ ರೈತ ಇಲ್ಲ ದಲಿತ. ನಿಜವಾದ ರೈತ ಲಾಭ ನಷ್ಟಕ್ಕಿಂತ ಅವನ ಕಾರ್ಯದಲ್ಲಿ ನಿರತನಾಗಿದ್ದಾನೆ. ಯಾವುದೇ ನಿಜವಾದ ರೈತ ಖಂಡಿತ ತನಗೆ ಅನ್ನ ಕೊಟ್ಟ ರಾಸುಗಳನ್ನು ಕಟುಕರಿಗೆ ಮಾರುವುದಿಲ್ಲ. ಈಗ ಆತನ ತಲೆಗೆ ಇದನ್ನು ತುಂಬಿ ಅವನನ್ನು ಬೀದಿಗೆ ಎಳೆದು ತರಬೇಕಷ್ಟೆ. ವಯಸ್ಸಾದ ಹಸುಗಳಿಗೆ ಒಂದು ಹೊರೆ ಹುಲ್ಲು ಒಂದು ಬಾನಿ ನೀರು ಖಂಡಿತ ರೈತನಿಗೆ ಹೆಚ್ಚಲ್ಲ ಏಕೆಂದರೆ ಆ ರಾಸುಗಳಿಂದ ಅವನು ಅದಕ್ಕಿಂತ ಹೆಚ್ಚಿನದನ್ನು ಪಡೆದಿರುತ್ತಾನೆ. ಅವುಗಳಿಂದಲೆ ತನ್ನ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಆದರೆ ಇವರ ಬಾಯಿ ಚಪಲಕ್ಕೆ ರೈತನ ಮೇಲೆ ಕರುಣೆ ಉಕ್ಕಿ ಬಂದಂತೆ ನಾಟಕವಾಡುತ್ತಿದ್ದಾರೆ. ಇವರ ಅಜೆಂಡ ಆ ಕಸಾಯಿಖಾನೆಗಳನ್ನು ನಂಬಿದವರ ಬದುಕು ಮತ್ತು ಅವರಗಳ "ಮತ" ಪಡೆಯುವ ದುರುದ್ದೇಶ.
ನನಗೀಗ ಅನಿಸುತ್ತಿರುವುದು, ಗೋಹತ್ಯೆಯ ನಿಷೇದದ ಕಾನೂನು ವಿರೋಧಿಸಿದಂತೆ ನರಹತ್ಯೆ ಕಾನೂನನ್ನು ವಿರೋಧಿಸ ಬೇಕಲ್ಲವೆ? ಏಕೆಂದರೆ ವಯಸ್ಸಾದ ವ್ಯಕ್ತಿಗಳಿಂದಲೂ ಯಾವುದೇ ಉಪಯೋಗವಿರುವುದಿಲ್ಲ. ಬೆಂಗಳೂರಿನಲ್ಲಾದರೆ ಅವರಿಗೆ ವೃದ್ದಾಶ್ರಮವಿದೆ ಹಳ್ಳಿಗಳಲ್ಲಿ ಅವುಗಳಿಲ್ಲವಾದ್ದರಿಂದ ನರಹತ್ಯೆ ನಿಷೇಧವನ್ನು ಹಿಂತೆಗೆದು ಕೊಂಡರೆ ವಯಸ್ಸಾದವರೆಲ್ಲರನ್ನೂ ಸಾಯಿಸಿ ಬಿಟ್ಟರೆ ದೇಶದ ಆರ್ಥಿಕತೆಗೆ ಇಂಬು ಸಿಗುವುದಲ್ಲದೆ ಇವರಿಗೆ ಖರ್ಚು ಮಾಡುವ ಆಹಾರ ನೀರು ಎಲ್ಲವನ್ನೂ ಮಾರಿಕೊಳ್ಳುವುದರಿಂದ ವೈಯಕ್ತಿವಾಗಿ ಅಲ್ಲದೆ ದೇಶಕ್ಕೂ ಲಾಭವಾಗುವುದರಲ್ಲಿ ಸಂಶಯವಿಲ್ಲ. ಇನ್ನೂ ಒಂದು ಲಾಭವೂ ಇದೆ, ಭಾರತದಲ್ಲಿ ಇಂತಹ ಒಂದು ಕಾನೂನು ಬಂದರೆ ಭಯೋತ್ಪಾದನೆಯೂ ಕಡಿಮೆಯಾಗುತ್ತದೆ ಮನುಷ್ಯ ಜೀವಕ್ಕೆ ಬೆಲೆ ಇಲ್ಲದ ಮೇಲೆ ಕೊಲ್ಲುವವರು ಕಡಿಮೆಯಾಗುತ್ತಾರೆ.
ಬಾಳ ಸಂಜೆಯಲ್ಲಿರುವವರಿಗೂ ಮಾಡುವ ಖರ್ಚನ್ನೂ ಹೀಗೆಯೆ ಲೆಕ್ಕ ಹಾಕಿ ನೋಡಿದರೆ ಮುಂದೆ ಅದೂ ಬರಬಹುದು ನೀವೆನಂತೀರಾ?
Tuesday, March 23, 2010
ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ!
ಅದೊಂದು ದಿನ ಅಮ್ಮ ಹೊರಗೆ ಹೋಗ್ಬೇಕಿದೆ ನಾನು ಅಡುಗೆ ಮಾಡಿಟ್ಟಿರ್ತಿನಿ ಬಡಿಸ್ಕೊಂಡು ಊಟ ಮಾಡಿ ಹೋಗು ಎಂದು ಬೆಳಿಗ್ಗೆಯೆ ಹೇಳಿದ್ದರು.
ಸರಿ ೧೨ ಗಂಟೆಗೆ ಬಂದವನೆ ಊಟ ಮಾಡಲು ಕುಳಿತವನಿಗೊಂದು ಬಾಗಿಲಲ್ಲಿ ಬೀಡಾಡಿ ಹಸುವೊಂದು ಬಂದು ನಿಂತು ಅಂಬಾ ಎಂದು ಕರೆಯಲು ಆರಂಭಿಸಿತು. ಒಂದು ಬಕೆಟ್ ನೀರು ತೆಗೆದು ಕೊಂಡು ಹೋಗಿಟ್ಟೆ ಊಹೂಂ ಮೂಸಿ ನೋಡಲಿಲ್ಲ. ಸರಿ ಹೋಗುತ್ತೆ ಬಿಡು ಎಂದು ಕೊಂಡವನೆ ಊಟ ಮುಗಿಸಿದೆ. ಆಗ ಬಂತು ಅಮ್ಮನ ಕರೆ ಬಾಗಿಲಿಗೆ ಒಂದು ಹಸು ಬಂದು ಅಮ್ಮಾ ಅಂತ ಕರೆಯುತ್ತೆ ಕಣೊ ಅಲ್ಲಿ ಬುಟ್ಟಿಯಲ್ಲಿ ಒಂದೆರಡು ಬಾಳೆಹಣ್ಣಿರುತ್ತೆ ಕೊಟ್ಬಿಡು ಎಂದರು. ಆಗ ಗೊತ್ತಾಯ್ತು ಅಮ್ಮನ ಚಡಪಡಿಕೆಗೆ ಕಾರಣ.
ಇಷ್ಟೆಲ್ಲಾ ನೆನಪಾದದ್ದು, ಈಗ ೪.೩೦ ರ ಸಮಯದಲ್ಲಿ ರಬ್ಬರ್ ಅಂಟಿಹಾಕಿ ಟೈಲ್ಸ್ ನೆಲದ ಮೇಲೆ ಜಾರದಂತೆ ಮಾಡಿ ಬೀಸುವಕಲ್ಲಿನಿಂದ ಬೀಸುತ್ತಿದ್ದ ನಮ್ಮಮ್ಮ, ಅಮ್ಮಾ ಎನ್ನುವ ಆ ಕರೆಗೆ ಬೀಸುವಕಲ್ಲನ್ನು ಬಿಟ್ಟು ಬಾಳೆಹಣ್ಣು ತೆಗೆದು ಕೊಂಡು ಹೋದಾಗ ಎನಿಸಿದ್ದು
ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮ?